Description
ಪ್ರಸ್ತುತ ಸಹಾಯಕ ಆಯುಕ್ತರಾಗಿ (GST) ಕಾರ್ಯ ನಿರ್ವಹಿಸುತ್ತಿರುವ ಅಶೋಕ್ ಎಂ ಮಿರ್ಜಿ, ಇವರು ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳು, ಉದ್ಯೋಗ ಹುಡುಕುವವರು ಹಾಗೂ ತಮ್ಮ ಜೀವನದಲ್ಲಿ ಸೋಲನ್ನು ಎದುರಿಸುತ್ತಿರುವ ಪ್ರತಿಯೊಬ್ಬರಿಗೂ ಪ್ರೇರಣೆ ನೀಡುವ ಸಲುವಾಗಿ ಸ್ಪೂರ್ತಿದಾಯಕ ಕಥೆಗಳನ್ನು ಬರೆದಿದ್ದಾರೆ.
* ಈ ಕೃತಿಯ “ಬಿದ್ದು ಗೆದ್ದವರು – ಸೋತಾಗ ಪುಟ ತಿರುವಿ “ ಈ ಪ್ರೇರಣಾದಾಯಕ ಕೃತಿ ಜೀವನದ ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ ಅದನ್ನು ಗೆಲುವಿನ ಹಾದಿಯನ್ನಾಗಿ ಪರಿವರ್ತಿಸಿಕೊಳ್ಳುವ ಪ್ರಕ್ರಿಯೆಯನ್ನು ವಿವರಿಸುತ್ತದೆ.
“ಬಿದ್ದು ಗೆದ್ದವರು” ಎಂಬ ಶೀರ್ಷಿಕೆಯು ತೀವ್ರ ಪ್ರಭಾವ ಬೀರಿಸುವಂತಹದು ಈ ಶಬ್ದಗಳು ಯಶಸ್ಸು ಮತ್ತು ವಿಫಲತೆಯ ನಡುವಿನ ಸೂಕ್ಷ್ಮ ಸಂಬಂಧವನ್ನು ಪ್ರತಿಬಿಂಬಿಸುತ್ತವೆ.
* ಸೋಲು ಅನುಭವಿಸಿದ ನಂತರವೂ ಹೇಗೆ ಒಬ್ಬ ವ್ಯಕ್ತಿ ಮತ್ತೆ ಚೇತರಿಸಿ, ಯಶಸ್ಸಿನತ್ತ ಸಾಗಬಹುದು ಎಂಬುದು ಜೊತೆಗೆ ಸೋಲನ್ನು ಜೀವನದ ಅಂತ್ಯವೆಂದು ಪರಿಗಣಿಸುವವರಿಗಾಗಿ ನಂಬಿಕೆಯ ಕಿರಣವನ್ನು ನೀಡುತ್ತದೆ.
* ಓದುಗರಿಗೆ ಪ್ರೇರಣೆ, ಸ್ಪೂರ್ತಿ ಮತ್ತು ದೃಢತೆ ನೀಡುವಂತಹ ಶಕ್ತಿಶಾಲಿ ಕೃತಿಯಾಗಿದೆ.






